ಬೆಂಗಳೂರು-ರಾಜಕೀಯ ನಾಯಕರ ಪ್ರತಿಮೆಗೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಎಫೆಕ್ಟ್ ತಟ್ಟಿದೆ.ರಾತ್ರೋರಾತ್ರಿ ರಾಜೀವ್ ಗಾಂಧಿ ಪ್ರತಿಮೆಗೆ ಬಿಬಿಎಂಪಿ ಮುಸುಕು ಹಾಕಿದೆ.ಬೆಂಗಳೂರಿನ ಮಲ್ಲೇಶ್ವರಂ ಬಳಿ ರಾಜೀವ್ ಗಾಂಧಿ ಪ್ರತಿಮೆಗೆ ಪಾಲಿಕೆ ಅಧಿಕಾರಿಗಳು ಮುಸುಕು ಹಾಕಿದ್ದಾರೆ.ಮತದಾರರ ಮೇಲೆ ಪ್ರತಿಮೆ ಪ್ರಭಾವ ಬೀರುತ್ತೆ ಅಂತ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಹೀಗಾಗಿ ಕಳೆದ ರಾತ್ರಿ ಪ್ರತಿಮೆಗೆ ಬಟ್ಟೆ ಹಾಕಿ ಬಿಬಿಎಂಪಿ ಅಧಿಕಾರಿಗಳು ಮುಚ್ಚಿದ್ದಾರೆ.ಆದ್ರೆ ಬೆಳಗ್ಗೆಯಾಗುತ್ತಿದಂತೆ ರಾಜೀವ್ ಗಾಂಧಿ ಪ್ರತಿಮೆ ಮೇಲೆ ಹಾಕಿದ್ದ ಮುಸುಕು ಮಾಯಾವಾಗಿದೆ.ಇದು ಎಷ್ಟು ಸರಿ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ.