ಮೋದಿ ಅಧಿಕಾರಕ್ಕೇರಿದ ಮೂರು ದಿನದಲ್ಲಿ ಸ್ವಿಸ್ ಬ್ಯಾಂಕಿನಿಂದ ಕಪ್ಪುಹಣ ತರುತ್ತೇವೆಂದರು. ಅವರ ಅನುಯಾಯಿಗಳು ಚಿನ್ನದ ರಸ್ತೆಯ ಕಥೆಗಳನ್ನೂ ಹೆಣೆದರು. ಬ್ಲಾಕ್ ಮನಿ ತರುವುದು ಅಷ್ಟು ಸುಲಭವಲ್ಲ ಎಂದು ಗೊತ್ತಿದ್ದವರೂ ಆಟ ನೋಡುತ್ತಾ ಸುಮ್ಮನೇ ಕುಳಿತುಬಿಟ್ಟರು. ಭರವಸೆ ಕೊಟ್ಟವರು ಕಣ್ತಪ್ಪಿಸಿ ಜಾರಿಕೊಳ್ಳುವ ಸ್ಥಿತಿಗೆ ಬಿದ್ದಿದ್ದಾರೆ. ಏಕೆಂದರೇ ಸ್ವಿಸ್ ಬ್ಯಾಂಕಿನಿಂದ ಕಪ್ಪುಹಣ ತರುವ ವಿಚಾರವಿರಲಿ, ಇಲ್ಲಿರುವ ಬಿಳಿ ಹಣದ ರಕ್ಷಣೆಯೇ ಅವರ ಕೈಲಿ ಸಾಧ್ಯವಾಗಲಿಲ್ಲ. ದೊಡ್ಡ ದೊಡ್ಡ ಬಿಸಿನೆಸ್ ಕುಳಗಳು ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚಿಸಿ, ಅನಾಯಾಸವಾಗಿ ವಿದೇಶಕ್ಕೆ ಪಲಾಯನಗೈದಿದ್ದಾರೆ. ಮಲ್ಯ, ನೀರವ್ ಮೋದಿ, ಲಲಿತ್ ಮೋದಿ, ಮೇಹುಲ್ ಚೋಕ್ಸಿ, ನಿತಿನ್ ಸಂದೇಸರ, ಏರ್ಸೆಲ್ ಮ್ಯಾಕ್ಸಿಸ್ ಸಿ ಶಿವಶಂಕರನ್ ಎಲ್ಲರೂ ಕೋಟಿ ಕೋಟಿ ಲೂಟಿ ಮಾಡಿ ಪರಾರಿಯಾದವರೇ..!